
ವುಮೆನ್ಸ್ ಪ್ರೀಮಿಯರ್ ಲೀಗ್ನ ಸೀಸನ್ 18ರಲ್ಲಿ ಆರ್ಸಿಬಿಗೆ ತವರಿನಲ್ಲಿ ಸತತ ಎರಡನೇ ಸೋಲು ಎದುರಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈ ವೋಲ್ಟೆಜ್ ಪಂದ್ಯದಲ್ಲಿ ಯು.ಪಿ.ವಾರಿಯರ್ಸ್ ವಿರುದ್ದ ಫಲಿತಾಂಶ ಟೈ ಆಗಿತ್ತು. ನಂತರ ನಡೆದ ಸೂಪರ್ ಓವರ್ನಲ್ಲಿ ಆರ್ಸಿಬಿ ಸೋಲಿಗೆ ಒಳಗಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಠಕ್ಕೆ 180 ರನ್ ಕಲೆ ಹಾಕಿತ್ತು. ಬೆಂಗಳೂರು ಪರ ಡ್ಯಾನಿ ವ್ಯಾಟ್ ಹಾಡ್ಜ್ (41),ಎಲೈಸಿ ಪೆರ್ರಿ (90),ಅವರ ಅರ್ಧಶತಕ ಬಲದಿಂದ ಆರ್ಸಿಬಿ ಉತ್ತಮ ಮೊತ್ತ ಕಲೆಹಾಕಿತ್ತು. ದೊಡ್ಡ ಗುರಿಯನ್ನು ಬೆನ್ನತ್ತಿದ ಯುಪಿ 20 ಓವರ್ಗಳಲ್ಲಿ 180 ರನ್ ಗಳಿಸಿ ಅಲೌಟ್ ಆಯಿತ್ತು. ಕೊನೆ ಓವರ್ನಲ್ಲಿ ಗೆಲ್ಲುವಿಗೆ 18 ರನ್ ಬೇಕಿದ್ದಾಗ ಸೋಫಿ ಎಕ್ಲೆಸ್ಟೋನ್ ಅದ್ಬುತ ಬ್ಯಾಟಿಂಗ್ನಿಂದ ಇನ್ನೂ ಒಂದು ಬಾಲ್ ಇರುವಾಗಲೇ ಪಂದ್ಯ ಸ್ಕೋರ್ ಲೆವೆಲ್ ಆಗಿತ್ತು. ಕಡೆ ಎಸೆತದಲ್ಲಿ 1 ರನ್ ಅಗತ್ಯವಿದ್ದಾಗ ಕ್ರಾಂತಿ ಗೌಡ್ ಕ್ರೀಸ್ನಲ್ಲಿದ್ದರು. ಆ ಕೊನೆ ಎಸೆತದಲ್ಲಿ ಅವರು ಡಾಟ್ ಆದರು ರನ್ ಓಡಿದರಾದರೂ ಸೋಫಿ ಎಕ್ಲೆಸ್ಟೋನ್ ರನೌಟ್ ಆಗಿ ಪಂದ್ಯ ಟೈ ಆಯಿತ್ತು..

ಪಂದ್ಯ ಟೈ, ರೋಚಕ ಸೂಪರ್ ಓವರ್
ವುಮೆನ್ಸ್ ಪ್ರೀಮಿಯರ್ ಇತಿಹಾಸದಲ್ಲೇ ಮೊದಲ ಬಾರಿ ಆರ್ಸಿಬಿ ಮತ್ತು ಯು ಪಿ ತಂಡಗಳ ನಡುವೆ ಸೂಪರ್ ಓವರ್ ನಡೆಸಯಿತ್ತು. 20 ಓವರ್ಗಳ ಪಂದ್ಯ ಟೈ ಆಗುತ್ತಿದ್ದಂತೆ ಸೂಪರ್ ಓವರ್ ನಡೆಸಲಾಯಿತ್ತು. ಮೊದಲು ಬ್ಯಾಟ್ ಮಾಡಿದ ಯುಪಿ ತಂಡ 1 ವಿಕೆಟ್ಗೆ 8 ರನ್ ಗಳಿಸಿ ಆರ್ಸಿಬಿಗೆ 9 ರನ್ಗಳ ಟಾರ್ಗೆಟ್ ನೀಡಿತ್ತು. ರಿಚಾ ಘೋಷ್,ಸ್ಮೃತಿ ಮಂಧನಾಗೆ 9 ರನ್ ಗಳಿಸಲು ಸಾಧ್ಯವಾಗದೇ ಕೇವಲ 4 ರನ್ಗಳಿಗೆ ಸೀಮಿತವಾದರು. ಇದರ ಪರಿಣಾಮ ಆರ್ಸಿಬಿ ತವರಿನಲ್ಲಿ ಎರಡನೇ ಸೋಲಿಗೆ ಶರಣಾಯಿತ್ತು…
ಅಭಿಷೇಕ್. ಎಸ್