
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇಂದು ಬೆಂಗಳೂರು ಹಾಗೂ ಡೆಲ್ಲಿ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಗೆದ್ದು ಬಳಿಕ ಹ್ಯಾಟ್ರಿಕ್ ಸೋಲು ಕಂಡಿರುವ ಆರ್ಸಿಬಿ ಇಂದು ಡೆಲ್ಲಿ ವಿರುದ್ದ ಜಯ ಹಳಿಗೆ ಮರಳಲು ಪರಿತಪಿಸುತ್ತಿದೆ. ಪ್ರಮುಖವಾಗಿ ತಂಡದಲ್ಲಿ ಸೋಫಿ ಡಿವೈನ್, ಶ್ರೇಯಾಂಕ ಪಾಟೀಲ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಎಲ್ಲಿಸ್ ಪೆರ್ರಿ ಅವರ ಮೇಲೆ ತಂಡ ಅವಲಂಬಿತವಾಗಿದೆ. ನಾಯಕಿ ಸ್ಮೃತಿ ಮಂಧಾನ ಉತ್ತಮ ಆರಂಭ ಪಡೆದುಕೊಂಡರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲವಾಗುತ್ತಿದ್ದಾರೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಆರ್ಸಿಬಿಗೆ ಈ ಪಂದ್ಯ ಮಹತ್ವದಾಗಿದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಡೆಲ್ಲಿ ವಿರುದ್ದ ಹೋರಾಟ ನಡೆಸಬೇಕಿದೆ. ಇನ್ನೊಂದು ಕಡೆ ಡೆಲ್ಲಿ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಲಯದಲ್ಲಿದ್ದು ಆರ್ಸಿಬಿ ವಿರುದ್ದ ಮೇಲುಗೈ ಸಾಧಿಸಿಸುವ ಲೆಕ್ಕಾಚಾರದಲ್ಲಿದೆ. ಅದಲ್ಲದೇ ಇಂದು ಬೆಂಗಳೂರಿನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ನ ಕೊನೆಯ ಪಂದ್ಯ ಆಗಿರುವುದ್ದರಿಂದ ಆರ್ಸಿಬಿ ತವರಿನ ಅಭಿಮಾನಿಗಳ ಮುಂದೆ ಕೊನೆಯ ಪಂದ್ಯವಾದರೂ ಗೆಲ್ಲಲ್ಲಿ ಎಂದು ಆರ್ಸಿಬಿ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

ಅಭಿಷೇಕ್.ಎಸ್