
ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು4 ವಿಕೆಟ್ಗಳಿಂದ ಮಣಿಸಿ 5ನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸ್ಮಿತ್ ಆರಂಭದಲೇ ತಮ್ಮ ನಿರ್ಧಾರ ತಪ್ಪೆಂದು ಸಾಬೀತಾಯಿತು. ಟ್ರಾವಿಸ್ ಹೆಡ್(39), ಕೂಪರ್ ಕೊನೊಲಿ(0) ತಂಡ 50 ರನ್ ಗಳಿಸುವಲ್ಲಿ ಇವರಿಬ್ಬರ ವಿಕೆಟ್ ಕಳೆದುಕೊಂಡಿತ್ತು. ನಂತರ ಬಂದ ನಾಯಕ ಸ್ಟೀವನ್ ಸ್ಮಿತ್ (73),ಲ್ಯಾಬುಸ್ಚಾಗ್ನೆ(29,ಅಲೆಕ್ಸ್ ಕ್ಯಾರಿ (61) ಅವರ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ 264 ರನ್ಗಳಿಗೆ ಅಲೌಟ್ ಆಯಿತ್ತು. ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ 3, ವರುಣ್ ಚಕ್ರವರ್ತಿ 2, ರವೀಂದ್ರ ಜಡೇಜಾ 2, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
ಭಾರತಕ್ಕೆ ಆರಂಭಿಕ ಆಘಾತ
265 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಭಾರತ ತಂಡಕ್ಕೆ ಮೊದಲ 5 ಓವರ್ಗಳಲ್ಲಿಯೇ ಆರಂಭಿಕ ಆಘಾತ ಎದುರಾಯಿತು. ಶುಭಮಾನ್ ಗಿಲ್ (8) ಬೇಗನೇ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. 3ನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ವಿರಾಟ್ ಕೊಹ್ಲಿ ಜೊತೆ ನಾಯಕ ರೋಹಿತ್ ಶರ್ಮಾ (28) ತಾಳ್ಮೆಯ ಇನ್ನಿಂಗ್ಸ್ ಆಡಿದರು. ಶರ್ಮಾ ಔಟಾದ ಬಳಿಕ ಶ್ರೇಯಸ್ ಅಯ್ಯರ್ ಹಾಗೂ ಕೊಹ್ಲಿ 91 ರನ್ಗಳ ಜೊತೆಯಾಟ ಆಡಿ ಭಾರತವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಯ್ಯರ್ (45), ನಿರ್ಗಮಿಸಿದ ನಂತರ ಅಕ್ಷರ್ ಪಟೇಲ್ (27), ಕೆಎಲ್ ರಾಹುಲ್ (42) ರನ್ ಗಳಿಸಿ ತಂಡವನ್ನು ಗೆಲ್ಲುವಿನ ದಡ ಸೇರಿಸಿದರು. ಇತ್ತ ಇನ್ನೊಂದು ಬದಿಯಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ತಾಳ್ಮೆಯ ಆಟವಾಡಿದ ವಿರಾಟ್ ಕೊಹ್ಲಿ 98 ಎಸೆತಗಳಲ್ಲಿ 84 ರನ್ ಗಳಿಸಿ ಭಾರತ ತಂಡದ ಗೆಲ್ಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್ ತಲುಪಿರುವ ಭಾರತ ತಂಡ ಮಾರ್ಚ್ 9 ರಂದು ಸೆಮಿಫೈನಲ್ 2 ರಲ್ಲಿ ಗೆದ್ದ ತಂಡದ ವಿರುದ್ದ ಪೈಪೋಟಿ ನಡೆಸಲಿದೆ…

ಅಭಿಷೇಕ್.ಎಸ್