
ಐಪಿಎಲ್ 2025ರ ಆವೃತ್ತಿಗೆ ಅಖಾಡ ಸಿದ್ದವಾಗಿದೆ. ಎರಡು ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಲಿದೆ. ಐಪಿಎಲ್ನ ಪ್ರಮುಖ ತಂಡವಾಗಿರುವ ಆರ್ಸಿಬಿ ಕೂಡ ಟೂರ್ನಿಗೆ ಸಜ್ಜಾಗುತ್ತಿದೆ. ಈ ವೇಳೆ ಆರ್ಸಿಬಿ ಅನ್ ಬಾಕ್ಸ್ ಈವೆಂಟ್ ಅಯೋಜನೆ ಮಾಡಿದ್ದು ಮಾರ್ಚ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಈವೆಂಟ್ಗೆ ಟಿಕೆಟ್ ಮಾರಾಟ ಆರಂಭಿಸಲಾಗಿದ್ದು ಕೇವಲ 1 ಗಂಟೆಗಳಲ್ಲೇ ಎಲ್ಲ ಟಿಕೆಟ್ಗಳು ಸೋಲ್ಟ್ ಔಟ್ ಆಗಿವೆ. ಹಿಂದೆಗಿಂತಲೂ ಈ ಬಾರಿಯ ಅನ್ಬಾಕ್ಸ್ ಈವೆಂಟ್ ಬಹಳ ವಿಶೇಷವಾಗಿದೆ. ತಂಡದ ನೂತನ ನಾಯಕನ್ನಾಗಿ ರಜತ್ ಪಾಟೀದರ್ಗೆ ಈ ಬಾರಿ ಅವಕಾಶ ನೀಡಲಾಗಿದೆ. ಎಂದಿನಂತೆ ಅಲದ್ಲೇ ಈ ಬಾರಿ ಸಮತೋಲನದಿಂದ ಕೂಡಿರುವ ತಂಡವನ್ನು ಆರ್ಸಿಬಿ ಕಟ್ಟಿದೆ ಎಂದು ಹೇಳಲಾಗುತ್ತಿದೆ. ಇನ್ನು ಆರ್ಸಿಬಿ ಈವೆಂಟ್ ಅನ್ಬಾಕ್ಸ್ ಬಗ್ಗೆ ಮಾತನಾಡಿರುವ ಆರ್ಸಿಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜೇಶ್ ಮೆನನ್ ಟೂರ್ನಿ ಆರಂಭಕ್ಕೂ ಮುನ್ನ ಈ ಒಂದು ಈವೆಂಟ್ ವೇದಿಕೆಯಾಗಿರಲಿದೆ. ಅಭಿಮಾನಿಗಳು ತಂಡದೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಅವಕಾಶವಾಗಿರಲಿದೆ. ನಮ್ಮ ಅಭಿಮಾನಿಗಳಿಗೆ ಮತ್ತೊಂದು ಸ್ಮರಣೀಯ ಅನುಭವವನ್ನು ಸೃಷ್ಟಿಸಲು ಎದುರು ನೋಡುತ್ತಿದ್ದೇವೆ ಎಂದು ಆರ್ಸಿಬಿ ತಂಡದ ಸಿಇಒ ರಾಜೇಶ್ ಮೆನನ್ ತಿಳಿಸಿದ್ದಾರೆ.

ಅಭಿಷೇಕ್.ಎಸ್