
ಟ್ರೋಫಿಗಾಗಿ ಹರಸಾಹಸ. 3 ಬಾರಿ ರನ್ನರ್ಅಪ್, 17 ವರ್ಷಗಳ ಸುಧೀರ್ಘ ಕಾಯುವಿಕೆ, ಈಡೇರದ ಅಭಿಮಾನಿಗಳ ಕನಸು, ಇದು ಐಪಿಎಲ್ನಲ್ಲಿ ಕಳೆದ 17 ವರ್ಷದಿಂದ ಆಡುತ್ತಿರುವ ಆರ್ಸಿಬಿ ತಂಡದ ಕಥೆ, 18ನೇ ವರ್ಷದಲ್ಲಿ ಆದರೂ ಆರ್ಸಿಬಿ ಕಪ್ ಗೆಲ್ಲುತ್ತಾ ಎಂಬ ಕೋಟ್ಯಾಂತರ ಅಭಿಮಾನಿಗಳ ಪ್ರಶ್ನೆಗೆ 2 ತಿಂಗಳಲ್ಲಿ ಉತ್ತರ ಸಿಗಲಿದೆ. ಸೀಸನ್ 18ರಲ್ಲಿ ಆರ್ಸಿಬಿಯ ಪ್ರಯಾಣ ಇಂದಿನಿಂದ ಶುರುವಾಗಲಿದೆ.ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡದ ವಿರುದ್ದ ಸೆಣಸಾಡಲಿದೆ. ಒಂದು ಕಡೆ ಅನುಭವಿ ನಾಯಕ ಅಜಿಂಕ್ಯ ರಹಾನೆ, ಇನ್ನೊಂದು ಕಡೆ ಯು ನಾಯಕ ರಜತ್ ಪಾಟಿದಾರ್, ಎರಡು ಕಡೆ ಬಲಿಷ್ಠ ಆಟಗಾರರನ್ನು ಹೊಂದಿರುವ ಕದನವನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಕೆಕೆಆರ್ ಮತ್ತು ಆರ್ಸಿಬಿ ಸೀಸನ್ ಐಪಿಎಲ್ 2008ರಲ್ಲಿ ಮುಖಾಮುಖಿಯಾಗಿದ್ದವು, ಈಗ ಮತ್ತೆ ಬೆಂಗಳೂರು, ಕಲ್ಕತ್ತಾ ತಂಡಗಳು ಸೀಸನ್ ಆರಂಭದಲ್ಲಿ ಎದುರಾಗುತ್ತಿವೆ. ಹೀಗಾಗಿ ಸೀಸನ್ ಆರಂಭದಲ್ಲೇ ಅಭಿಮಾನಿಗಳಿಗೆ ರಸದೌತಣ ಸಿಗಲಿದೆ.
ಬಲಿಷ್ಠ ಕೆಕೆಆರ್ ತಂಡ
ಹಾಲಿ ಚಾಂಪಿಯನ್ ಕೆಕೆಆರ್ ತಂಡ ತನ್ನ ಕೋರ್ ಟೀಂ ಅನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಂಡೀಸ್ ದೈತ್ಯರಾದ ಸುನೀಲ್ ನರೇನ್, ರಸೆಲ್ ಎದುರಾಳಿಗಳಿಗೆ ತಲೆನೋವು ಆಗಲಿದ್ದಾರೆ. ಕ್ವಿಂಟಾನ್ ಡಿ ಕಾಕ್ ತಂಡದಲ್ಲಿ ಇರುವುದು ಪ್ಲಸ್ ಪಾಯಿಂಟ್, ಅನುಭವಿ ಬ್ಯಾಟರ್ ಮತ್ತು ನಾಯಕ ಅಜಿಂಕ್ಯ ರಹಾನೆ ತಂಡದ ಬ್ಯಾಟಿಂಗ್ ಜವಬ್ದಾರಿಯನ್ನು ನೋಡಿಕೊಳ್ಳಲಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತೊಮ್ಮೆ ತಮ್ಮ ಮಿಂಚಲು ತಯಾರಾಗಿದ್ದಾರೆ. ಜೊತೆಗೆ ಫಿನಿಶಿಂಗ್ಗೆ ಫೇಮಸ್ ಆಗಿರುವ ರಿಂಕು ಸಿಂಗ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಉಳಿದಂತೆ ರಸೆಲ್ ಪವರ್ ಕೆಕೆಆರ್ ತಂಡಕ್ಕಿದೆ. ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ, ಸುನೀಲ್ ನರೇನ್ ತಂಡದ ಆಧಾರಸ್ತಂಭ, ಇವರಿಬ್ಬರು ಬ್ಯಾಟರ್ಗಳಿಗೆ ಸವಾಲ್ ಆಗಲಿದ್ದಾರೆ. ಹರ್ಷಿತ್ ರಾಣಾ ವೇಗದ ಬೌಲಿಂಗ್ ವಿಭಾಗದ ಜವಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಸಮತೋಲನದಿಂದ ಕೂಡಿರುವ ಆರ್ಸಿಬಿ ತಂಡ
ಕಳೆದ 17 ವರ್ಷಕ್ಕೆ ಹೋಲಿಸಿಕೊಂಡರೆ ಆರ್ಸಿಬಿ ಈ ಬಾರಿ ಸಮತೋಲನದಿಂದ ತಂಡವನ್ನು ಕಟ್ಟಿದೆ. ಬ್ಯಾಟಿಂಗ್ ಬೌಲಿಂಗ್ ಸೇರಿದಂತೆ ಎರಡರಲ್ಲೂ ಸಮರ್ಥ ಆಟಗಾರನ್ನು ಹೊಂದಿದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ 2-3 ಸೀಸನ್ನಲ್ಲಿ ಡು ಪ್ಲೆಸಿಸ್ ಮಾಡಿದ ಕೆಲಸವನ್ನು ಫಿಲ್ ಸಾಲ್ಟ್ ಮಾಡಬೇಕಿದೆ. 3ನೇ ಕ್ರಮಾಂಕದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅಭ್ಯಾಸ ಪಂದ್ಯದಲ್ಲಿ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅವರಿಗೆ ಆಡುವ ಅವಕಾಶ ಸಿಗುವ ನಿರೀಕ್ಷೆಯಲ್ಲಿದೆ. ನಂತರ ನಾಯಕ ರಜತ್ ಪಾಟಿದರ್ 4 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಸೀಸನ್ಗಳಲ್ಲಿ ಬೆಂಗಳೂರಿಗೆ ತಲೆನೋವು ಆಗಿದ್ದು ಮದ್ಯಮ ಕ್ರಮಾಂಕದದಲ್ಲಿ ಬಲಿಷ್ಠ ಬ್ಯಾಟರ್ಗಳ ಕೊರತೆ, ಆಗ್ರ ಮೂವರು ಬ್ಯಾಟರ್ಗಳು ಔಟ್ ಆದರೆ ಆರ್ಸಿಬಿಯ ಕಥೆ ಮುಗಿತ್ತು ಎಂದೇ ಭಾವಿಸಲಾಗುತಿತ್ತು. ಆದರೆ ಈ ಸಲ ಆಗ್ರ ಕ್ರಮಾಂಕದಲ್ಲೂ ಸಹ ಆರ್ಸಿಬಿ ಬಲಿಷ್ಠವಾಗಿದೆ. ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ ಸ್ಟೋನ್, ಟೀಮ್ ಡೇವಿಡ್, ಕೃನಾಲ್ ಪಾಂಡ್ಯರಂತಹ ಆಟಗಾರರಿದ್ದು ಬ್ಯಾಟಿಂಗ್ ಬಲಿಷ್ಠವಾಗಿದೆ.

ಸಮರ್ಥ ಬೌಲಿಂಗ್ ಪಡೆ
ಆರ್ಸಿಬಿ ಈ ಸೀಸನ್ನಲ್ಲಿ ಸಮರ್ಥ ಬೌಲಿಂಗ್ ಪಡೆಯನ್ನೇ ಹೊಂದಿದೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಆರ್ಸಿಬಿಯ ರಿಟೈನ್ ಆಟಗಾರ ಯಶ್ ದಯಾಳ್, ಜೋಶ್ ಹೇಝಲ್ವುಡ್ ತಂಡದ ಪ್ರಮುಖ ಶಕ್ತಿಗಳು, ಈ ಮೂವರು ವೇಗಿಗಳ ಮೇಲೆ ಆರ್ಸಿಬಿ ಬೌಲಿಂಗ್ನಲ್ಲಿ ನಂಬಿಕೆ ಇಟ್ಟುಕೊಂಡಿದೆ. ಇದರ ಜೊತೆಗೆ ನುವಾನ್ ತುಷಾರ, ಲುಂಗಿ ಎನ್ಗಿಡಿ, ರಾಸಿಖ್ ಸಲಾಮ್ ದಾರ್, ಸ್ವಪ್ನಿಲ್ ಸಿಂಗ್, ಸುಯಾಶ್ ಶರ್ಮಾ ತಂಡದ ಬೌಲಿಂಗ್ ಶಕ್ತಿಯೆನಿಸಿಕೊಂಡಿದ್ದಾರೆ. ಹೀಗಾಗಿ ಇಂದಿನ ಆರ್ಸಿಬಿ ಹಾಗೂ ಕೆಕೆಆರ್ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಅಭಿಷೇಕ್ . ಎಸ್