
ಕೆಕೆಆರ್ ಹಾಗೂ ಆರ್ಸಿಬಿ ನಡುವಿನ ಪಂದ್ಯ ಕಲ್ಕತ್ತಾದಲ್ಲಿ ನಡೆಯಲಿದೆ. ಸೀಸನ್ನ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮಾರ್ಚ್ 22 ರಂದು ಕಲ್ಕತ್ತಾದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಒಂದು ವೇಳೆ ಮಳೆ ಸೀಮಿತ ಅವಧಿಯವರೆಗೂ ಬಂದರೂ ಪಂದ್ಯವನ್ನು ನಡೆಸಬಹುದಾಗಿದೆ. ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಉತ್ತಮ ಸೌಕರ್ಯಗಳಿದ್ದು ಮಳೆ ಬಂದ ಕೆಲವೇ ನಿಮಿಷಗಳಲ್ಲಿ ಪಂದ್ಯವನ್ನು ಅಯೋಜನೆ ಮಾಡಬಹುದಾಗಿದೆ.ಪಂದ್ಯವನ್ನು ಅಯೋಜನೆ ಮಾಡದಷ್ಟು ಮಳೆ ಬಂದರೆ ಉಭಯ ತಂಡಗಳಿಗೆ ತಲಾ 1 ಅಂಕಗಳನ್ನು ಹಂಚಲಾಗುತ್ತದೆ.

ಕೆಕೆಆರ್ ತಂಡ
ಅಜಿಂಕ್ಯ ರಹಾನೆ (ನಾಯಕ), ಸುನೀಲ್ ನರೈನ್, ಕ್ವಿಂಟನ್ ಡಿ ಕಾಕ್, ವೆಂಕಟೇಶ್ ಅಯ್ಯರ್, ಅಂಗ್ಕ್ರಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್,ಸ್ಪೆನ್ಸರ್ ಜಾನ್ಸನ್, ರಮನದೀಪ್ ಸಿಂಗ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ಆರ್ಸಿಬಿ ತಂಡ
ರಜತ್ ಪಾಟಿದಾರ್(ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಟೀಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಪಾಂಡ್ಯ, ಜೋಶ್ ಹ್ಯಾಜಲ್ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ, ಸ್ವಪ್ಪಿಲ್ ಸಿಂಗ್,ರಸೀಖ್ ಸಲಾಂ ದಾರ್ =========================================
ಅಭಿಷೇಕ್.ಎಸ್