
CAT Blames RCB For Bengaluru Stampede
ಕಳೆದ ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು “ಪ್ರಾಥಮಿಕ ಹೊಣೆಗಾರ” ಎಂದು ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ಮಂಗಳವಾರ ಅಭಿಪ್ರಾಯಪಟ್ಟಿದೆ.
RCB ತಂಡದ ಮೊದಲ ಐಪಿಎಲ್ ಟ್ರೋಫಿ ವಿಜಯೋತ್ಸವವನ್ನು ಆಚರಿಸಲು ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಮತ್ತು ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕಾರ್ಯಕ್ರಮವನ್ನು ಘೋಷಿಸಿದ ನಂತರ ಕ್ರೀಡಾಂಗಣದ ಬಳಿಯ ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ರಸ್ತೆ ಪ್ರದೇಶಗಳಲ್ಲಿ ಸುಮಾರು 2.5 ಲಕ್ಷ ಅಭಿಮಾನಿಗಳು ನೆರೆದಿದ್ದರು. “ಆದ್ದರಿಂದ, ಸುಮಾರು ಮೂರರಿಂದ ಐದು ಲಕ್ಷ ಜನ ಸೇರಿದ ಸಭೆಯಲ್ಲಿ ಸಂಭವಿಸಿದ ಆರ್ಸಿಬಿ ಕಾರಣ ಎಂದು ಪ್ರಾಥಮಿಕವಾಗಿ ಕಂಡುಬರುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಆರ್ಸಿಬಿ ಪೊಲೀಸರಿಂದ ಸೂಕ್ತ ಅನುಮತಿ ಅಥವಾ ಒಪ್ಪಿಗೆಯನ್ನು ಪಡೆಯಲಿಲ್ಲ ಎಂದು ಸಿಎಟಿ ಗಮನಿಸಿದೆ. “ಇದ್ದಕ್ಕಿದ್ದಂತೆ, ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆರ್ ಸಿಬಿ ಪೋಸ್ಟ್ ಮಾಡಿತ್ತು. ಈ ಮಾಹಿತಿಯ ಪರಿಣಾಮವಾಗಿ ಸಾರ್ವಜನಿಕರನ್ನು ಒಟ್ಟುಗೂಡಿಸಲಾಯಿತು” ಎಂದು ಸಿಎಟಿ ತನ್ನ ಅವಲೋಕನದಲ್ಲಿ ತಿಳಿಸಿದೆ.
ಆರ್ಸಿಬಿ ಜೂನ್ 4 ರ ಬೆಳಿಗ್ಗೆ ಪೆರೇಡ್ ಮತ್ತು ಅಭಿಮಾನಿಗಳ ಕಾರ್ಯಕ್ರಮದ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಪೋಸ್ಟ್ ಮಾಡಿತ್ತು ಮತ್ತು ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ದೊಡ್ಡ ಸಭೆಯನ್ನು ನಿರ್ವಹಿಸಲು ಪೊಲೀಸ್ ಇಲಾಖೆಗೆ ಸಾಕಷ್ಟು ಸಮಯವಿರಲಿಲ್ಲ ಎಂದು ನ್ಯಾಯಮಂಡಳಿ ಗಮನಿಸಿದೆ.
ಇದೇ ವೇಳೆ ರಾಜ್ಯ ಸರ್ಕಾರವನ್ನೂ ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಿಎಟಿ, ‘ಸಾಕಷ್ಟು ಆಧಾರಗಳಿಲ್ಲದೆ ರಾಜ್ಯ ಸರ್ಕಾರವು ಯಾಂತ್ರಿಕವಾಗಿ ಆದೇಶ ಹೊರಡಿಸಿತ್ತು ಎಂದು ಹೇಳಿದೆ.
ಇದೇ ವೇಳೆ ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಬೆಂಗಳೂರು ಪೀಠವು ಬೆಂಗಳೂರು ನಗರ ಇನ್ಸ್ಪೆಕ್ಟರ್ ಜನರಲ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ (ಪಶ್ಚಿಮ) ಅವರ ಅಮಾನತು ರದ್ದುಗೊಳಿಸಿ, ಅವರನ್ನು ತಕ್ಷಣವೇ ಮರುಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಜೂನ್ 5 ರ ಅಮಾನತು ಆದೇಶವನ್ನು ರದ್ದುಗೊಳಿಸಿ, ವಿಕಾಸ್ ಕುಮಾರ್ ಅವರು ಅಮಾನತನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಅನುಮತಿಸುತ್ತಾ, ಅಮಾನತು ಅವಧಿಯನ್ನು ಪೂರ್ಣ ವೇತನ ಮತ್ತು ಭತ್ಯೆಗಳೊಂದಿಗೆ ಕರ್ತವ್ಯವೆಂದು ಪರಿಗಣಿಸಲಾಗುತ್ತದೆ ಎಂದು ಸಿಎಟಿ ಹೇಳಿದೆ.
ಸರ್ಕಾರಿ ಇಲಾಖೆಯ ಕ್ರಮದಿಂದ ನೊಂದ ನಾಗರಿಕನೊಬ್ಬ ನ್ಯಾಯಾಲಯದ ಮೊರೆ ಹೋಗಿ ತನ್ನ ಪರವಾಗಿ ಕಾನೂನು ಘೋಷಣೆ ಪಡೆದರೆ, ಅದೇ ರೀತಿಯ ಇತರರಿಗೆ ನ್ಯಾಯಾಲಯಕ್ಕೆ ಬರುವ ಅಗತ್ಯವಿಲ್ಲದೆಯೇ ಪ್ರಯೋಜನವನ್ನು ವಿಸ್ತರಿಸಬೇಕು ಎಂಬ ಕಾನೂನಿನ ಸ್ಥಿರ ತತ್ವದ ಕಡೆಗೆ ರಾಜ್ಯ ಸರ್ಕಾರದ ಗಮನ ಸೆಳೆಯುವುದು ನಮ್ಮ ಕರ್ತವ್ಯವೆಂದು ನಾವು ಭಾವಿಸುತ್ತೇವೆ.
ಸರ್ಕಾರವು ಅದೇ ಆದೇಶದ ಮೂಲಕ ಅಮಾನತುಗೊಂಡ ಇತರ ಅಧಿಕಾರಿಗಳಿಗೆ ಅದೇ ಪ್ರಯೋಜನವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ನ್ಯಾಯಮೂರ್ತಿ ಬಿ ಕೆ ಶ್ರೀವಾಸ್ತವ, ಸದಸ್ಯ (ನ್ಯಾಯಾಂಗ) ಮತ್ತು ಸದಸ್ಯ (ಆಡಳಿತ) ಸಂತೋಷ್ ಮೆಹ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.