
2024ರ ಲೋಕಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ನಂತರ ಸುಮ್ಮನಿದ್ದ ಮಾಜಿ ಕೆ.ಎಸ್ ಈಶ್ವರಪ್ಪ ಇಂದು ಹಕ್ಕೊತ್ತಾಯದ ದಿನ ಹೆಸರಿನಡಿ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತ ಬಳಗ ಸಂಚಾಲಕರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬರಬೇಕಿದ್ದ ಅನುದಾನ ಬಿಡುಗಡೆ ಪರಿಶಿಷ್ಟ ಕಾಲೋನಿಗಳಿಗೆ ಮೂಲಸೌಕರ್ಯ,ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವುದು, ಶಿವಮೊಗ್ಗದಲ್ಲಿ ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಲ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಮಹಿಳೆಯರು ಮತ್ತು ಪುರುಷರು ಪಾಲ್ಗೋಂಡಿದ್ದರು. ಇದು ನಗರದ ಜೈಲ್ ಸರ್ಕಲ್ನಿಂದ ಮಹಾನಗರ ಪಾಲಿಕೆ ಆವರಣದವರೆಗೆ ಹಕ್ಕೂತ್ತಾಯ ಪ್ರತಿಭಟನೆ ಮೆರವಣಿಗೆ ನಡೆದಿದೆ.