
ಜನರಿಗೆ ಮೋಸ ಮಾಡಿ ದುಡ್ಡು ಹಣ ಎತ್ತಿಕೊಂಡು ಪರಾರಿಯಾಗಿದ್ದಾನೆ. ಈತ ಆನೇಕಲ್ನ ಕಾಚಾನಾಯಕನಹಳ್ಳಿಯಲ್ಲಿ 10 ವರ್ಷದಿಂದಿ ವಾಸವಿದ್ದ ಅಲ್ಲೇ ಒಂದು ಆನಂದ್ ಜ್ಯೂವಲರ್ಸ್ ಆ್ಯಂಡ್ ಕೇಸರ್ ಬ್ಯಾಂಕರ್ಸ್ ಎಂಬ ಒಡವೆ ಅಂಗಡಿಯನ್ನು ನಡೆಸುತ್ತಿದ್ದರು. 10 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿನ ಜನರ ನಂಬಿಕೆಗಳಿಸಿಕೊಂಡು ನಂಬಿಕೆ ಇಟ್ಟ ಜನರಿಗೆ ಐದು ಕೋಟಿಗೂ ಹೆಚ್ಚು ವಂಚನೆ ಮಾಡಿ ಮುನಾರಾಮ್ ಮತ್ತು ಅವನ ಸಹೋದರರು ಪರಾರಿಯಾಗಿದ್ದಾರೆ


ಜನರಿಗೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ 150ಕ್ಕೂ ಹೆಚ್ಚು ಜನರಿಂದ ಚೀಟಿ ಹಾಕಿಸಿಕೊಂಡು ಒಡವೆ ಕೊಡ್ತಿನಿ ಎಂದು ಜನರಿಗೆ ಹೇಳಿದ್ದನು.ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಹಣತಂದು ಕಟ್ಟಿದ್ದ ಜನರು. ಮತ್ತೊಷ್ಟು ಜನರು ಗಿರವಿ ಇಟ್ಟ ಒಡವೆ ಹಿಂಪಡೆಯಲು ಬಂದಾಗ ವಿಷಯ ತಿಳಿದಿದೆ. 15 ದಿನಗಳ ಹಿಂದಿಯೇ ಮುನಾರಾಮ್ ಮತ್ತು ಸಹೋದರರು ಮನೆ ಮತ್ತು ಅಂಗಡಿಯನ್ನು ಮುಚ್ಚಿಕೊಮಡು ದುಡ್ಡು ಒಡವೆಯನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ತಿಳಿದ ತಕ್ಷಣ ಗ್ರಾಮಸ್ಥರು ಸೂರ್ಯ ನಗರ ಪೊಲೀಸ್ ಠಾಣೆಗೆ ದೂರು ಕೊಡಲು ಓಡಿ ಬಂದಿದ್ದಾರೆ. ಇತ್ತ ಹಣವು ಇಲ್ಲದೇ ಒಡವೆಯೂ ಇಲ್ಲ, ಹನ ಕಟ್ಟಿಸಿಕೊಂಡವನು ಇಲ್ಲ ಎಂದು ತಮ್ಮ ಪರಿಸ್ಥಿತಿಯನ್ನು ತಿಳಿಸಿದ್ದಾರೆ