
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರಬನದ ಗಣಿವಾರ ಕೊಡಚಾದ್ರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ನಾಟಿ ಪಾಠ. ಸತತ ಐದನೇ ವರ್ಷ ನಾಟಿ ತರಬೇತಿ ನೀಡುತ್ತಿರುವ ಕೊಡಚಾದ್ರಿ ಆಂಗ್ಲ ಶಾಲೆ. ಹೇಗೆ ಅಂದರೆ ಶಿಕ್ಷಕರು. ವಿದ್ಯಾರ್ಥಿಗಳನ್ನು ನೇರವಾಗಿ ಭತ್ತದ ಗದ್ದೆಗೆ ಕರೆದುಕೊಂಡು ಭತ್ತದ ನಾಟಿ ಮಾಡಿಸಿ ಅದರ ಪ್ರಾಮುಖ್ಯತೆ ಮತ್ತು ರೈತರು ಹೇಗೆ ಕಷ್ಟ ಪಡುತ್ತಾರೆ ಎಂಬುದನ್ನುಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಶಿಕ್ಷಕರು ಈ ರೀತಿಯ ಒಂದು ತರಬೇತಿಯನ್ನು ಮಾಡಿದ್ದಾರೆ.
ಶಿಕ್ಷಕರ ಉದ್ದೇಶ ಇಷ್ಟೇ ಕಲಿಕೆ ಕೇವಲ ಪುಸ್ತಕದಲ್ಲಿರುವ ಪಠ್ಯಕ್ರಮಕ್ಕಷ್ಟೇ ಸೀಮಿತ ಆಗಬಾರದು ಎನ್ನುವುದು ಶಿಕ್ಷಕರ ಉದ್ದೇಶ . ಇದಕ್ಕಾಗಿ ಮಕ್ಕಳನ್ನು ಕೆಸರು ಗದ್ದೆಗೆ ಕರೆತಂದು ನಾಟಿ ಮಾಡಿಸಿದರು ಇದರಿಂದ ಹೊಸ ಅನುಭವ ಪಡೆದ ವಿದ್ಯಾರ್ಥಿಗಳು ಖುಷಿಯಿಂದ ಇದರ ಬಗ್ಗೆ ಮಾತನಾಡಿದ್ದಾರೆ. ಇದನ್ನು ಮಕ್ಕಳು ಕಂಬಳದ ಸಂಭ್ರಮ ಅನುಭವಿಸಿದ ರೀತಿಯಲ್ಲಿ ಸಂತೋಷ ಪಟ್ಟಿದ್ದಾರೆ.