
ಚಾಮರಾಜನಗರ (ಗುಂಡ್ಲುಪೇಟೆ) – ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಪ್ರದೇಶದಲ್ಲಿ ಭಾರಿ ಗಾತ್ರದ 15 ಅಡಿಗಳ ಹೆಬ್ಬಾವು ಪ್ರತ್ಯಕ್ಷವಾಗಿದೆ, ಇದರಿಂದ ಜಮೀನಿನ ಮಾಲಿಕರು ಗಾಬರಿಗೊಂಡಿದ್ದಾರೆ. ಈ ಘಟನೆ ಆಲತ್ತೂರು ಗ್ರಾಮದ ಶಾಂತಪ್ಪ ಎಂಬುವರ ಜಮೀನಿನಲ್ಲಿ ನಡೆದಿದೆ.
ಈ ಭಾರಿಗಾತ್ರದ ಹೆಬ್ಬಾವನ್ನು ಸ್ನೇಕ್ ಸ್ವಾಮಿ ಅವರು ರಕ್ಷಣೆ ಮಾಡಿದ್ದು, ಬಂಡೀಪುರ ಅಭಯಾರಣ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.