
ಉತ್ತರಪ್ರದೇಶದ ಪ್ರಯಾಗ್ ರಾಜ್ ಅಕ್ಷರಶಃ ದೇವನಗರಿಯಾಗಿ ಪರಿವರ್ತನೆಯಾಗಿದೆ. ಈ ಬಾರಿಯ ಮಹಾಕುಂಭಕ್ಕೆ ಸರಾಸರಿ 10, 000 ಎಕರೆ ಪ್ರದೇಶದಲ್ಲಿ ಮಹಾಕುಂಭ ನಗರವೇ ಸ್ಥಾಪನೆಯಾಗಿದೆ. ಶಿವರಾತ್ರಿ ವರೆಗೆ ನಡೆಯುವ ಈ ಮಹಾಕುಂಭಮೇಳದ ಮಹಾಹಬ್ಬಕ್ಕೆ ಚಾಲನೆ ಸಿಕ್ಕಿದೆ.. 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಕ್ಕೆ 45 ಕೋಟಿಗೂ ಹೆಚ್ಚಿನ ಭಕ್ತರು ಪಾಲ್ಗೋಳ್ಳುವ ನಿರೀಕ್ಷೆ ಇದೆ . ಕುಂಭ ಮೇಳ ಹಿಂದೂಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆ. ಕುಂಭ ಮೇಳದಲ್ಲಿ ನಾಲ್ಕು ಪ್ರಕಾರಗಳಿವೆ ಮೋದಲನೆಯದು ಕುಂಭಮೇಳ, ಎರಡನೆಯದು “ಅರ್ಧ ಕುಂಭಮೇಳ”, ಮೂರನೆಯದ್ದು “ಪೂರ್ಣ ಕುಂಭ” ಹಾಗೂ ನಾಲ್ಕನೆಯದ್ದೇ ಈ “ಮಹಾಕುಂಭಮೇಳ” .

ಕುಂಭಮೇಳವನ್ನು ಯಾವಾಗ ಯಾವಾಗ ಆಚರಿಸಲಾಗುತ್ತೆ ?
*ಕುಂಭಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತೆ ..ಅರ್ಧ ಕುಂಭಮೇಳವನ್ನು 6 ವರ್ಷಗಳಿಗೊಮ್ಮೆ , ಮತ್ತು ಪೂರ್ಣ ಕುಂಭಮೇಳವನ್ನು 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಆದರೆ ಸದ್ಯ ಜರುಗುತ್ತಿರುವ ಈ ಮಹಾಕುಂಭಮೇಳ ಸರಾಸರಿ 144 ವರ್ಷಗಳಿಗೊಮ್ಮೆ ಜರುಗುತ್ತದೆ… ವಿಶೇಷವೆಂದರೆ ನಾಲ್ಕು ಗೃಹಗಳ ಅಪರೂಪದ ದಿವ್ಯ ಸಂಯೋಜನೆಯಾಗುತ್ತಿರುವ ಸಂಧರ್ಭದಲ್ಲಿ ಈ ಮಹಾಕುಂಭಮೇಳ ಜರುಗುತ್ತದೆ.. ಹೀಗೆ ನಾಲ್ಕು ಗೃಹಗಳ ಸಂಯೋಜನೆಯಾಗುವುದು 144 ವರ್ಷಗಳಿಗೊಮ್ಮೆ… ಆದ ಕಾರಣ ಈ ಬಾರಿಯ ಮಹಾಕುಂಭಮೇಳ ಈ ಶತಮಾನದ ಕೊನೆಯ ಮಹಾಕುಂಭಮೇಳ.. ಮತ್ತೆ ಈ ಮಹಾಕುಂಭ ಬರುವುದು 144 ವರ್ಷಗಳ ನಂತರ ಅಂದರೆ ನಮ್ಮ ಎರಡು ಪಿಳಿಗೆಗಳ ಹೊತ್ತಿಗೆ..

ಕುಂಭಮೇಳದ ಸಮಯದಲ್ಲಿ ಸ್ನಾನ ಮಾಡಿದ ನಂತರ ಮೋಕ್ಷ ಪ್ರಾಪ್ತಿಯಾಗುತ್ತಾ ..?
ಈ ಮಹಾಕುಂಭದಲ್ಲಿ ವಿಶೇಷವಾಗಿ ನಾಗಾಸಾಧುಗಳು , ಅಘೋರಿಗಳ್ ಅಪಾರ ಸಂಖ್ಯೆಯಲ್ಲಿ ಬಂದು ಪುಣ್ಯಸ್ನಾನ ಮಾಡ್ತಾರೆ.. ಈ ನಾಗಾ ಸಾಧುಗಳು ಮತ್ತು ಅಘೋರಿಗಳು ಯಾರು ಇವರ ಹಿನ್ನಲೆ ಏನು ಮತ್ತು ಕುಂಭಮೇಳ ಹೇಗೆ ಶುರುವಾಯಿತು ಎನ್ನುವುದನ್ನ ಇದೀಗ ತಿಳಿದುಕೊಳ್ಳೋಣ ..? ಮಧ್ಯಕಾಲೀನ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಅಸುರರು ಮತ್ತು ದೇವತೆಗಳ ಮಧ್ಯೆ ಸಮುದ್ರ ಮಂಥನ ಜರುಗಿದಾಗ ಅಮೃತದ ಕುಂಭವನ್ನ ಅಂದ್ರೆ ಮಡಿಕೆಯನ್ನ ಇಂದ್ರ ದೇವ ಮೋಹಿನಿಯ ರೂಪದಲ್ಲಿ ಬಂದು ಹೊತ್ತೊಯ್ಯುತ್ತಿರುವಾಗ , ಅಮೃತದ ನಾಲ್ಕು ಹನಿಗಳು ಭೂಮಿಯ ಮೇಲೆ ಬೀಳುತ್ತದೆ. ಆ ನಾಲ್ಕು ಪವಿತ್ರ ಸ್ಥಳಗಳೇ ಹರಿದ್ವಾರ , ಪ್ರಯಾಗರಾಜ್ , ನಾಸಿಕ್ ಮತ್ತು ಉಜ್ಜಯಿನಿ . ಈ ಸ್ಥಳಗಳು ಒಂದು ನಿರ್ದಿಷ್ಟ ಅತೀಂದ್ರಿಯ ಶಕ್ತಿ ಮತ್ತು ಆಧ್ಯಾತ್ಮಿಕ ಮೌಲ್ಯವನ್ನು ಪಡೆದುಕೊಂಡವು. ಈ ಕಾರಣಕ್ಕಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಈ ನಾಲ್ಕು ಸ್ಥಳಗಳಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ.

ಈ ನಾಗ ಸಾಧುಗಳು ಯಾರು ಅವರ ಹಿನ್ನೆಲೆಯೇನು ತಿಳಿಯೋಣ…
ಹಿಂದು ಧರ್ಮದಲ್ಲಿ ಹಲವಾರು ರೀತಿಯ ಸಾಧುಗಳನ್ನ ನಾವು ನೋಡಿರುತ್ತೇವೆ.. ಆದರೆ ಎಲ್ಲಾ ಸಾಧುಗಳಿಗಿಂತ ನಾಗಾಸಾಧುಗಳ ತಪಸ್ಸು ಮತ್ತು ಜೀವನಶೈಲಿ ತುಂಬಾ ವಿಭಿನ್ನ ಮತ್ತು ಕಷ್ಟಕರ..ಇನ್ನೂ ಈ ಮಹಾಕುಂಭಮೇಳದ ಆಕರ್ಷಣೆಯ ಕೇಂದ್ರ ಬಿಂದುವೆಂದರೆ ನಾಗಾಸಾಧುಗಳು, ಕುಂಭಮೇಳ ಆರಂಭವಾದಾಗ ಲಕ್ಷಾಂತರ ಸಂಖ್ಯೆಯಲ್ಲಿ ನಾಗಾಸಾಧುಗಳು ಆಗಮಿಸ್ತಾರೆ. ಹೀಗೆ ಕುಂಭಮೇಳದಲ್ಲಿ ಪಾಲ್ಗೊಂಡ ನಾಗಾಸಾಧುಗಳು ಕುಂಭಮೇಳ ಮುಗಿದ ಮೇಲೆ ಅಗೋಚರವಾಗಿ ಬಿಡ್ತಾರೆ.. ಇವರೆಲ್ಲ ಎಲ್ಲಿಂದ ಬಂದ್ರು ಎಲ್ಲಿಗೆ ಹೋದ್ರು ಎನ್ನುವುದೆ ಒಂದು ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ. ಹಲವು ಮಾಹಿತಿಗಳ ಪ್ರಕಾರ ಉತ್ತರಾಖಂಡ ಬೆಟ್ಟಗಳು ಮತ್ತು ಗುಜರಾತ್ನ ಕೆಲ ಸ್ಥಳಗಳಿಂದ ಈ ನಾಗಾಸಾಧುಗಳು ಬರ್ತಾರಂತೆ..ಸಾಮಾನ್ಯವಾಗಿ ನಗ್ನ ಸ್ಥಿತಿಯಲ್ಲಿರುವ ಈ ಸಾಧುಗಳು.. ಮೈ ತುಂಬಾ ಮಸಣದ ಬೂದಿ ಮತ್ತು ರುದ್ರಾಕ್ಷಿ ಮಾಲೆ ಧರಿಸಿರುತ್ತಾರೆ.. ಹಾಗೂ ಇವರ ಪರಿಚಯ ನಿಗೂಢವಾಗಿರುತ್ತದೆ…ಧಾರ್ಮಿಕ ನಾಯಕರ ಪ್ರಕಾರ ಶಿವನ ಗಣಗಳೇ ಈ ನಾಗಾಸಾಧೂಗಳ ಸಮೂಹಕ್ಕೆ ಪ್ರೇರಣೆಯಾಗಿದೆ..ಇನ್ನೂ 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಕಠೋರ ವ್ರತ ಮಾಡುತ್ತಿರುವ ಈ ಸಾಧುಗಳನ್ನು ಒಗ್ಗೂಡಿಸಿ ಒಂದು ಪಂಥವನ್ನು ಮಾಡ್ತಾರೆ ಅವರೇ ಈ ನಾಗಾಸಾಧು ಪಂತ …ಭಾರತದ ಉತ್ತರ ಪ್ರದೇಶ ಮೂಲದ ತಪಸ್ವಿ ಶೈವ ಸಾಧುಗಳ ಜೀವನ ಕ್ರಮವಾಗಿದೆ. ೭ನೇ ಮತ್ತು ೮ನೇ ಶತಮಾನದ ನಡುವೆ ಮಧ್ಯಕಾಲೀನ ಭಾರತದಲ್ಲಿ ಹುಟ್ಟಿಕೊಂಡ ಶೈವಧರ್ಮದ ತಾಂತ್ರಿಕ, ಪುರಾಣೇತರ ರೂಪವಾದ ಕಪಾಲಿಕಾ ಸಂಪ್ರದಾಯದಿಂದ ಕವಲೊಡೆದು ಉಳಿದಿರುವ ಏಕೈಕ ಪಂಥವಾಗಿದೆ.

ಅಸಲಿಗೆ ಅಗೋರಿಗಳು ಎಲ್ಲಿರುತ್ತಾರೆ …?
ಅಘೋರಿಗಳು ಅವರ ಪೂರ್ವಜರಂತೆಯೇ, ಶವಸಂಸ್ಕಾರದ ಆಚರಣೆಗಳಲ್ಲಿ ತೊಡಗುತ್ತಾರೆ, ಸ್ಮಶಾನವೇ ಇವರ ವಾಸ ಸ್ಥಾನ.. ಅವರ ದೇಹಕ್ಕೆ ದಹನದ ಚಿತಾಭಸ್ಮವನ್ನು ಹಚ್ಚಿಕೊಳ್ಳುತ್ತಾರೆ. ಮತ್ತು ಮಾನವ ಶವಗಳಿಂದ ಎಲುಬುಗಳನ್ನು, ತಲೆಬುರುಡೆಗಳನ್ನು ಸಂಗ್ರಹಿಸಿ ಆಭರಣಗಳನ್ನಾಗಿ ಮಾಡಿ ಧರಿಸಿರುತ್ತಾರೆ… ಘಾಟ್ಗಳ್ಲಿ ಸುಟ್ಟ ಮಾನವರ ಮಾಂಸವನ್ನು ಕೂಡ ಈ ಅಘೋರಿಗಳು ತಿನ್ನುತ್ತಾರೆ.. ಅನೇಕ ಅಘೋರಿ ಬಗ್ಗೆ ಗ್ರಾಮೀಣ ಜನರು ಹೆಚ್ಚಿನ ಗೌರವವನ್ನು ಹೊಂದಿದ್ದಾರೆ.. ಅಘೋರಿಗಳು ಅವರ ಕಠಿಣ ತಪಸ್ಸಿನ ಅಭ್ಯಾಸಗಳ ಮೂಲಕ ಹಲವು ಸಮಸ್ಯೆಗಳನ್ನು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದ್ದಾರೆ, ಎಂದು ಹೇಳಲಾಗುತ್ತೆ . ಒಟ್ಟಾರೆಯಾಗಿ ಈ ಬಾರಿಯ ಮಹಾಕುಂಭಮೇಳ ಶತಮಾನದ ಅತ್ಯಂತ ವೈಭವ ಮತ್ತು ಪಾರಂಪರಿಕ ಆಚರಣೆಯ ಜೀವಂತ ಉದಾಹರಣೆಯಾಗಿದೆ ….

ನೀವು ಈ ಮಹಾಕುಂಭಮೇಳದ ಅನುಭವ ಪಡೆಯುವ ಆಸೆ ಇದ್ದರೆ ಉತ್ತರಪ್ರದೇಶದ ಪ್ರಯಾಗ್ರಾಜ್ ಗೆ ಭೇಟಿ ನೀಡಿ ಮಹಾಕುಂಭದಲ್ಲಿ ಪಾಲ್ಗೊಂಡು ಪುಣ್ಯಸ್ನಾನ ಮಾಡಿ ಪುನೀತರಾಗಿ.. ಈ ರೀತಿಯ ಇನ್ನಷ್ಟು ಹೆಚ್ಚಿನ ಕುತೂಹಲಕಾರಿ ಸಂಗತಿಗಳಿಗಾಗಿ ಅಶ್ವವೇಗ ನ್ಯೂಸ್ ಸಬ್ಸ್ರೈಬ್ ಮಾಡಿ ಮತ್ತು ಬೆಲ್ ಐಕಾನ್ ಕ್ಲಿಕ್ ಮಾಡಿ…