
ವುಮೆನ್ಸ್ ಪ್ರೀಮಿಯರ್ ಲೀಗ್ನ ಸೀಸನ್ 3ರಲ್ಲಿ ಆರಂಭದಲ್ಲಿ ಅಬ್ಬರಿಸಿ ಠುಸ್ ಪಟಾಕಿಯಂತೆ ಆಗಿರುವ ಡಿಫೆಂಡಿಗ್ ಚಾಂಪಿಯನ್ ಆರ್ಸಿಬಿಗೆ ಯು.ಪಿ ವಾರಿಯರ್ಸ್ ವಿರುದ್ದ ಮಾಡು ಇಲ್ಲ ಮಡಿ ಪಂದ್ಯವಾಗಿದೆ. ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಸೋತು 2ರಲ್ಲಿ ಗೆದ್ದಿದೆ. ಆರ್ಸಿಬಿ ಪ್ಲೇ ಆಫ್ ಹಂತಕ್ಕೇರಬೇಕಾದರೆ ಮುಂದಿನ ಎರಡು ಪಂದ್ಯಗಳನ್ನು ಉತ್ತಮ ರನ್ರೇಟ್ನಿಂದ ಗೆಲ್ಲಬೇಕಿದೆ. ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ರಿಚ್ಚಾ ಘೋಷ್ ತಮ್ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ. ಬೌಲಿಂಗ್ನಲ್ಲಿ ಸಹ ಸಂಘಟಿತ ಪ್ರದರ್ಶನದ ಅಗತ್ಯವಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸತತ 4 ಪಂದ್ಯಗಳನ್ನು ಸೋತಿರುವ ಆರ್ಸಿಬಿಗೆ ಆತ್ಮವಿಶ್ವಾಸದ ಕೊರತೆ ಎದುರಾಗಿದೆ. ಸಹ ಆಟಗಾರರನ್ನು ಹುರಿದುಂಬಿಸಿ ಪಂದ್ಯ ಗೆಲ್ಲುವ ಹೊಣೆಗಾರಿಕೆ ನಾಯಕಿ ಸ್ಮೃತಿ ಮಂಧಾನ ಮೇಲಿದೆ. ಮತ್ತೊಂದು ಕಡೆ ಆರ್ಸಿಬಿಗಿಂತ ಹೀನಾಯ ಸ್ಥಿತಿಯಲ್ಲಿರುವ ಯು.ಇ ವಾರಿಯರ್ಸ್ ಇದಾಗಲೇ ಪ್ಲೇ ಆಫ್ ಹಂತದಿಂದ ಹೊರಬಿದ್ದಿದೆ. ಹೀಗಾಗಿ ಯುಪಿ ತಂಡ ಯಾವುದೇ ಒತ್ತಡವಿಲ್ಲದೇ ಆಡಲಿದೆ.

ಅಭಿಷೇಕ್. ಎಸ್